
Read Time:1 Minute, 9 Second
ಮಂಗಳೂರು : ಎಡಪದವು ಪುಪಾಡಿಕಲ್ಲು ಎಂಬಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿ ಬಿರಿ ( ಟೆಂಟ್ ) ಬಳಿ ನಿನ್ನೆ (ಭಾನುವಾರ) ಪೂಜೆಯ ಸಮಾರಂಭ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿ ಒರ್ವ ಚರುಮುರಿ ಸ್ಟಾಲನ್ನು ಇರಿಸಿದ್ದನು ಈ ವೇಳೆ ಸ್ಟಾಲಿಗೆ ಟೊಮೇಟೊ ತಿನ್ನಲು ಬಂದ ದನದ ಮುಖಕ್ಕೆ ವ್ಯಕ್ತಿ ಕೋಪಗೊಂಡು ಚೂರಿ ಇರಿದ ಘಟನೆ ನಡೆದಿದೆ.



ಚೂರಿ ಇರಿದ ವ್ಯಕ್ತಿಯನ್ನು ಚರಮುರಿ ಸ್ಟಾಲ್ ನ ಉಮರಬ್ಬ ಎಂದು ತಿಳಿದುಬಂದಿದೆ. ಈತ ಜಾತ್ರೆಯ ವೇಳೆ ಹಲವೆಡೆ ಚರುಮುರಿ ಸ್ಟಾಲ್ ಹಾಕಿ ವ್ಯಾಪಾರ ನಡೆಸುತ್ತಿದ್ದು ಈತನ ಈ ಕೃತ್ಯಕ್ಕೆ ಸ್ಥಳೀಯರು ಅಕ್ರೋಶ ಹೊರಹಾಕಿದ್ದಾರೆ. ಘಟನೆ ತಿಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ದನಕ್ಕೆ ಚಿಕಿತ್ಸೆ ನೀಡಿದ್ದಾರೆ.ಈ ಘಟನೆಯ ಬಗ್ಗೆ ವಿಶ್ವ ಹಿಂದೂಪರಿಷತ್ ತೀವ್ರ ಖಂಡಿಸಿದ್ದು ಜಜಪೆ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

