ಉಪ್ಪಿನಂಗಡಿ : ಮನೆಗೆ ನುಗ್ಗಿ ಚಿನ್ನಾಭರಣ ದೋಚಿ, ದಾಖಲೆಗಳನ್ನು ಬೆಂಕಿ ಹಚ್ಚಿ ಸುಟ್ಟ ಕಿಡಿಗೇಡಿಗಳು…!!

0 0
Read Time:1 Minute, 29 Second

ಉಪ್ಪಿನಂಗಡಿ : ಮನೆಗೆ ನುಗ್ಗಿದ ಕಳ್ಳರು ಚಿನಾಭರಣ ವನ್ನು ದೋಚಿ, ಪ್ರಮುಖ ದಾಖಲೆಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಇಚ್ಲಂಪಾಡಿ ಗ್ರಾಮದ ಮಾನಡ್ಕ ಎಂಬಲ್ಲಿನ ಸತೀಶ್ ಎಂಬವರ ಮನೆಯಲ್ಲಿ ನಡೆದಿದೆ.

ಸತೀಶ್ ರವರು ಮದುವೆ ಕಾರ್ಯದ ನಿಮಿತ್ತ ಸಂಬಂಧಿಕರ ಮನೆಗೆ ಹೋಗಿದ್ದು, ನಸುಕಿನ ವೇಳೆ ಮನೆಯೊಳಗೆ ಬೆಂಕಿ ಉರಿಯುತ್ತಿರುವುದನ್ನು ಕಂಡು ಸತೀಶ್‌ರ ಅಣ್ಣನ ಮಗಳು ಫೋನ್ ಕರೆ ಮಾಡಿ ತಿಳಿಸಿದ್ದು, ಮನೆ ಮಂದಿ ಆಗಮಿಸಿ ನೋಡಿದಾಗ ಆ ವೇಳೆ ಮನೆಯ ಕೋಣೆಯಲ್ಲಿ ಬೆಂಕಿ ಉರಿಯುತ್ತಿದ್ದು ಬಳಿಕ ಪರಿಶೀಲಿಸಿದಾಗ ಮನೆಯ ಹಿಂಬದಿ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಎರಡು ಬಂಗಾರ ಚೈನ್, ಮೂರು ಜೊತೆ ಕಿವಿಯ ಬೆಂಡೋಲೆ, ಸೇರಿದಂತೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನಾಭರಣವನ್ನು ಕಳವುಗೈದಿರುವುದು ಹಾಗೂ ಭೂಮಿಯ ದಾಖಲೆಗಳು, ಬ್ಯಾಂಕ್ ದಾಖಲೆಗಳು, ಆಧಾರ್ ಕಾರ್ಡ್, ಅಂಗವಿಕಲ ಕಾರ್ಡ್, ಹಲವು ದಾಖಲೆಗಳನ್ನು ಇರಿಸಲಾಗಿದ್ದ ಕಪಾಟಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. 

ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *