ಬಂಟ್ವಾಳ: ಆಯತಪ್ಪಿ ನದಿಗೆ ಬಿದ್ದ ವೃದ್ಧ – ಜೀವದ ಹಂಗು ತೊರೆದು ರಕ್ಷಿಸಿದ ಇಬ್ಬರು ಯುವಕರು

0 0
Read Time:1 Minute, 9 Second

ಬಂಟ್ವಾಳ: ಉಕ್ಕಿ ಹರಿಯುತ್ತಿದ್ದ ನದಿಗೆ ಆಯತಪ್ಪಿ ಬಿದ್ದ ವೃದ್ಧರೋರ್ವರನ್ನು ಯುವಕರಿಬ್ಬರು ಜೀವದ ಹಂಗು ತೊರೆದು ರಕ್ಷಿಸಿರುವ ಘಟನೆ ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ನಡೆದಿದೆ. ಉಮ್ಮರ್ (70) ಎಂಬವರು ರಕ್ಷಿಸಲ್ಪಟ್ಟ ವ್ಯಕ್ತಿ. ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ದಾರಿಯಾಗಿ ಉಮ‌ರ್ ಅವರು ಸಂಚರಿಸುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಸೇತುವೆಗೆ ಯಾವುದೇ ರೀತಿಯ ತಡೆ ಇಲ್ಲದಿದ್ದರಿಂದ ಅವರು ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಆ ತಕ್ಷಣ ಅಲ್ಲಿಯೇ ಇದ್ದ ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್‌ ಹಾಗೂ ಸುರೇಶ್ ಅವರು ಪ್ರವಾಹವನ್ನೂ ಲೆಕ್ಕಿಸದೆ ನದಿಗೆ ಹಾರಿ ಈಜಾಡಿ ಉಮ‌್ಮರ್ ಅವರನ್ನು ರಕ್ಷಿಸಿದ್ದಾರೆ. ಅವರಿಗೆ ಸ್ಥಳೀಯರು ಯುವಕರು ಸಾಥ್ ನೀಡಿದ್ದು, ಯುವಕರ ಸಮಯಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *