
Read Time:1 Minute, 15 Second
ಮಂಗಳೂರು: ಕುಲಾಲ ಕಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆ ಗಳ ಒಕ್ಕೂಟ ಕುಂಭ ಕಲಾವಳಿ 2026 ಇದರ 3 ನೇ ಪೂರ್ವ ಭಾವಿ ಸಿದ್ಧತೆ ಸಭೆ ಶ್ರೀ ವೀರನಾರಾಯಣ ಸಭಾಂಗಣದಲ್ಲಿ ಲಯನ್ ಅನಿಲ್ ದಾಸ್ ರವರ ಅಧ್ಯಕ್ಷ ತೆಯಲ್ಲಿ ನಡೆಯಿತು.



ಆಮಂತ್ರಣ ಪತ್ರಿಕೆ ಹಂಚಿಕೆ ಹಾಗೂ ಕಾರ್ಯಕ್ರಮದ ಬಗ್ಗೆ ವಿವಿಧ ಸಮಿತಿಗಳ ಜವಾಬ್ದಾರಿ ನಿರ್ವಹಣೆ, ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಸಮಿತಿಯ ಸದಸ್ಯರಲ್ಲಿ ಚರ್ಚಿಸಲಾಯಿತು, ಸಭಿಕರು ಸಲಹೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಾರಾಯಣ ಗುರು ಪೀಠ ಶ್ರೀ ಗುರುವಿನ ಸರ್ವಮತ ಸಮ್ಮೇಳನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಗೊಳ್ಳಲಿರುವ ಹಿರಿಯರಾದ ಶ್ರೀ ಅಶೋಕ್ ಕುಲಾಲ್ ರವರಿಗೆ ಕುಲಾಲ ಯುವ ವೇದಿಕೆಯಿಂದ ಗೌರವಿಸಲಾಯಿತು.

ವೇದಿಕೆಯಲ್ಲಿಸುಧಾಕರ್ ಸಾಲ್ಯಾನ್, ಸುಕುಮಾರ್ ಬಂಟ್ವಾಳ, ರಾಧಾ ಕೃಷ್ಣ ಬಂಟ್ವಾಳ, ಗಂಗಾಧರ್ ಬಂಜನ್, ಕಾರ್ಯದರ್ಶಿ ನವೀನ್ ಮಜಲ್, ಭಾರತೀ ಶೇಸಪ್ಪ, ಸುಲೋಚನಿ ಟೀಚರ್ ಉಪಸ್ಥಿತರಿದ್ದರು.


