
Read Time:1 Minute, 18 Second
ಮಂಗಳೂರು: ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ ಸಮಿತಿ (ರಿ) ಬೀರಿ ಗಣೇಶ ಭಜನಾ ಮಂದಿರ ಬೀರಿ ಕೋಟೆಕಾರ್ ಹಾಗೂ ಆನಂದಶ್ರಮ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳು ಹಾಗೂ ದಿವಂಗತ ಜಲಂಧರ್ ರೈ ಯವರ ಹಿತೈಷಿಗಳು ಆಯೋಜಿಸಿದ ಜಲಂಧರ್ ರೈ ಸ್ಮರಣಾರ್ಥ ಹೈ ಸ್ಕೂಲ್ ಮಟ್ಟದ ಬಾಲಕ ಬಾಲಕಿಯರ ಜಲಂಧರ್ ರೈ ಟ್ರೋಫಿ 2025 ಕ್ರೀಡಾ ಕೂಟ ಉಚ್ಚಿಲ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.



ಇದರ ಸಮಾರೋಪ ಸಮಾರಂಭ ಲಯನ್. ಅನಿಲ್ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಉಪಸ್ಥಿತರಿದ್ದರು ಬಳಿಕ ವಿಜೇತರಿಗೆ ಟ್ರೋಫಿ ಮತ್ತು ನಗದು ಬಹುಮಾನ ವಿತರಿಸಲಾಯಿತು.

ಹಾಗೂ ಕ್ರೀಡಾಕ್ಷೇತ್ರ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಶ್ರೀ ವಿಶ್ವನಾಥ್ ಕೋಳಿಯೂರು, ಶ್ರೀ ಮನೋಜ್ ಉಚ್ಚಿಲ್, ಶ್ರೀಮತಿ ಸಂದ್ಯಾ ಉಚ್ಚಿಲ್ ಮುಂತಾದ ಸಾಧಕರಿಗೆ ಸನ್ಮಾನಿಸಲಾಯಿತು. ಜಿಲ್ಲೆ ಯ ವಿವಿಧ ಪ್ರೌಢಶಾಲೆ ಗಳ ಕಬಡ್ಡಿ ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದವು.





