ವಿಟ್ಲ : ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್ – ಭಕ್ತರ ಆಕ್ರೋಶ

0 0
Read Time:1 Minute, 12 Second

ವಿಟ್ಲ: ಅಪರೇಟರ್ ನಿಯಂತ್ರಣ ತಪ್ಪಿ ಡ್ರೋನ್ ರಥದ ಮೇಲಿದ್ದ ಅರ್ಚಕರ ತಲೆಗೆ ಬಡಿದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ನಡೆದಿದೆ.

ನಿನ್ನೆ ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಈ ವೇಳೆ ವಿಡಿಯೋ ಮಾಡಲು ಹಾರಿಸಿದ ಡ್ರೋನ್ ಒಂದು ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ. ಈ ವೇಳೆ ದೇವರ ಮೂರ್ತಿ ಹೊತ್ತ ಮುಖ್ಯ ಅರ್ಚಕರು ರಥದ ಮೇಲೆ ತೆರಳಿದ್ದರು. ಡ್ರೋನ್ ಬಡಿದ ವೇಳೆ ದೇವರ ಮೂರ್ತಿ ಹೊತ್ತಿದ್ದ ಅರ್ಚಕರು ಕೊಂಚ ತಬ್ಬಿಬಾದರೂ ಸುದಾರಿಸಿಕೊಂಡರು.ಡ್ರೋನ್ ಸ್ವಲ್ಪ ತಪ್ಪಿ ದೇವರ ಮೂರ್ತಿ ಹೊತ್ತಿದ್ದ ಅರ್ಚಕರಿಗೆ ತಾಗಿದ್ದರೆ , ದೇವರ ಮೂರ್ತಿ ಕೆಳಗೆ ಬೀಳುವ ಸಾಧ್ಯತೆ ಇತ್ತು. ಮಹಾರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು, ಡ್ರೋನ್ ಅಪರೇಟರ್ ಹುಚ್ಚಾಟಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *