ದಕ್ಷಿಣ ಕನ್ನಡ: ಮೊದಲ ಸುತ್ತಿನಲ್ಲಿ ಬ್ರಿಜೇಶ್‌ ಚೌಟಗೆ ಮುನ್ನಡೆ

ಮಂಗಳೂರಿನ ಎನ್ ಐಟಿಕೆ ಮತ ಎಣಿಕಾ ಕೇಂದ್ರದಲ್ಲಿ ಅಂಚೆ ಮತ ಎಣಿಕೆ ಆರಂಭಗೊಂಡಿದೆ. 8537 ಅಂಚೆ ಮತಗಳ ಎಣಿಕೆಗೆ ಒಂದು ಕೊಠಡಿಯಲ್ಲಿ 20 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಗಳನ್ನು ಮತ ಎಣಿಕಾ ಸಿಬ್ಬಂದಿ ಎಣಿಕೆ ಮಾಡ್ತಿದ್ದಾರೆ. ಇನ್ನು ದಕ್ಷಿಣ ಕನ್ನಡ 1ನೇ ಸುತ್ತು ಆರಂಭಗೊಂಡಿದ್ದು ಬಿಜೆಪಿ ಬ್ರಿಜೇಶ್ ಚೌಟ ಮುನ್ನಡೆ 188 ಮತಗಳ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಪದ್ಮರಾಜ್ ಆರ್ ಪೂಜಾರಿ: 96 ಗಳಿಸಿದ್ದಾರೆ. ದ.ಕ ಜಿಲ್ಲಾಧಿಕಾರಿ ಮುಳೈ ಮುಗಿನಲ್ ಸಮ್ಮುಖದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ.

Read More

ಆಳ್ವಾಸ್ ನಲ್ಲಿ ಜೂನ್ 7 ಹಾಗೂ 8 ರಂದು ಬೃಹತ್ ಉದ್ಯೋಗ ಮೇಳ

ಮಂಗಳೂರು: 2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳವು ವೃತ್ತಿ ಆಕಾಂಕ್ಷಿಗಳಿಗೆ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದೆ. ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಅವಕಾಶ ಕೊಡಿಸುವ ಮಹತ್ಕಾರ್ಯವನ್ನು ಸಾಂಗವಾಗಿ ನಡೆಸುತ್ತಿದೆ. ಎರಡು ದಶಕಗಳಿಂದ ಪ್ರಗತಿ ಮೇಳವು ತನ್ನ ನಿಖರವಾದ ಯೋಜನೆ, ಉತ್ತಮ ಆತಿಥ್ಯ ಮತ್ತು ಉನ್ನತ ಮಟ್ಟದ ವೃತ್ತಿ ಅವಕಾಶಗಳೊಂದಿಗೆ ಪ್ರತಿಷ್ಠಿತ ಉದ್ಯೋಗ ಮೇಳವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಕಳೆದ 13 ಆಳ್ವಾಸ್ ಪ್ರಗತಿ ಹಾಗೂ 7 ಉದ್ಯೋಗ ಮೇಳಗಳಲ್ಲಿ ಒಟ್ಟು…

Read More

ಮಂಗಳೂರಿನ ವಿಶ್ವಾಸಾರ್ಹ ಸಂಸ್ಥೆ ವಿಷನ್ ಇಂಡಿಯಾ ಮತ್ತೆ ತಂದಿದೆ ಸೀಸನ್ 2 ನ ಉಳಿತಾಯಾಯದೊಂದಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಯೋಜನೆ

ಮಂಗಳೂರು: ಸ್ಕೀಮ್ ಹಾಗೂ ಸೇವಿಂಗ್ ಯೋಜನೆಯ ಇತಿಹಾಸದಲ್ಲೇ ಅತೀ ದೊಡ್ಡ ಬಹುಮಾನವನ್ನು ನೀಡುವ ಮಹತ್ತರ ಯೋಜನೆಗೆ ವಿಷನ್ 2 ಇಂಡಿಯಾ (ಸೀಸನ್ 2) ಚಾಲನೆ ನೀಡಿದೆ. 1ಕೋಟಿ ನಗದು ಹಾಗೂ ಚಿನ್ನಾಭರಣ, ಒಟ್ಟು ಹದಿನೇಳು ಕಾರು, ಹತ್ತು ಸುಸಜ್ಜಿತ ಮನೆ, ನೂರಕ್ಕಿಂತ ಹೆಚ್ಚು ದ್ವಿಚಕ್ರ ವಾಹನ, 50ಕ್ಕಿಂತ ಹೆಚ್ಚು ಐಪೋನ್, ವಿದೇಶ ಪ್ರಯಾಣ ಹಾಗೂ ಸಮಾಧಾನಕರ ಬಹುಮಾನವಾಗಿ ನಗದು, ಚಿನ್ನ ಹಾಗೂ ಇನ್ನಿತರ ಫರ್ನಿಚರ್, ಎಲೆಕ್ಟ್ರಾನಿಕ್, ಗೃಹೋಪಯೋಗಿ ವಸ್ತುಗಳನ್ನು ನೀಡಲಿದೆ ಎಂದು ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ. ಪ್ರತಿ…

Read More

ರಸ್ತೆಯಲ್ಲಿ ನಮಾಝ್ ಪ್ರಕರಣ: B ರಿಪೋರ್ಟ್ ರದ್ದು ಪಡಿಸಲು VHP ಮನವಿ

ಮಂಗಳೂರು: ವಿಶ್ವ ಹಿಂದೂ ಪರಿಷದ್ ಮಂಗಳೂರು ವತಿಯಿಂದ ನಮಾಜು ಮಾಡಿದ ಪ್ರಕರಣಕ್ಕೆ ಹಾಕಿದ ” B ” ರಿಪೋರ್ಟ್ ರದ್ದು ಪಡಿಸಿ ಶರಣ್ ಪಂಪ್ವೆಲ್ ವಿರುದ್ದ ದಾಖಲಿಸಿದ ಪ್ರಕರಣ ರದ್ದು ಗೊಳಿಸಲು ಮನವಿ ಸಲ್ಲಿಸಲಾಗಿದೆ. ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜು ಮಾಡಿದ ಪ್ರಕರಣಕ್ಕೆ ಹಾಕಿದ ” B ” ರಿಪೋರ್ಟ್ ರದ್ದು ಪಡಿಸಲು ಮತ್ತು ಕರ್ನಾಟಕ ಸರಕಾರ ದ್ವೇಷ ರಾಜಕಾರಣ ಮಾಡಿ ಹಿಂದೂ ನಾಯಕ ಶರಣ್ ಪಂಪುವೆಲ್ ರವರನ್ನು ಗುರಿಯಾಗಿಸಿ ದಾಖಲಿಸಿದ ಪ್ರಕರಣ ವಾಪಾಸ್…

Read More

ಅಡ್ಕ ಕುಲಾಲ ಬಂಗೇರ ಕುಟುಂಬ ನಾಗಮೂಸ್ಥಾನದ ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ ರಾಮಪ್ರಸಾದ್ ಮರು ಆಯ್ಕೆ

ಅಡ್ಕ ಕುಲಾಲ ಬಂಗೇರ ನಾಗಮೂಲಸ್ಥಾನದ ಕುಟುಂಬಸ್ಥರ ಸಭೆಯು ದಿನಾಂಕ 02.06.2024ನೇ ಆದಿತ್ಯವಾರದಂದು ನಡೆದಿರುತ್ತದೆ. ಸಭೆಯಲ್ಲಿ ಎಲ್ಲಾ ಕುಟುಂಬಸ್ಥರು ಒಗ್ಗಟ್ಟಿನಿಂದ ಮುಂದಿನ ಕಾರ್ಯಕ್ರಮಗಳನ್ನು ನಡೆಸುವುದಕ್ಕೋಸ್ಕರ ಸಮಿತಿ ರಚನೆಯ ಬಗ್ಗೆ ಚರ್ಚಿಸಲಾಯಿತು. ಕುಟುಂಬದ ಯಜಮಾನರಾದ ಶ್ರೀ ಸೀತಾರಾಮ ಬಂಗೇರರವರು ಮಾತನಾಡಿ ಮುಂದಿನ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ರೀತಿಯಲ್ಲಿ ಒಳ್ಳೆಯ ರೀತಿಯಿಂದ ನಡೆಯಬೇಕೆಂದು ತಿಳಿಸಿದರು. ಅಧ್ಯಕ್ಷರಾದ ಶ್ರೀ ರಾಮಪ್ರಸಾದ್ ರವರು ಮಾತನಾಡಿ ಈವರೆಗಿನ ಎಲ್ಲಾ ವಿಚಾರಗಳನ್ನು ಸಭೆಗೆ ತಿಳಿಸಿದರಲ್ಲದೆ, ಮುಂದೆ ಹೊಸ ಸಮಿತಿ ರಚನೆಯಾಗಬೇಕೆಂದು ವಿನಂತಿಸಿದರು. ಸೇರಿದ ಕುಟುಂಬಸ್ಥರು ಮೊದಲಿನ ಸಮಿತಿಯೇ…

Read More

ರಸ್ತೆಯಲ್ಲಿ ನಮಾಜ್ ಪ್ರಕರಣ ಮಸೀದಿ ಆಡಳಿತ ಮಂಡಳಿ ವಿಷಾದ – ಪೊಲೀಸ್‌ರ ನಡೆ ಅಕ್ಷಮ್ಯ

ಮಂಗಳೂರು : ಇಲ್ಲಿನ ಕಂಕನಾಡಿ ಮಸೀದಿ ಮುಂಭಾಗದ ರಸ್ತೆಯಲ್ಲಿಯೇ ನಮಾಜ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಸೀದಿಯ ಆಡಳಿತ ಮಂಡಳಿಯೇ ವಿಷಾದ ವ್ಯಕ್ತಪಡಿಸಿ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆಂದು ವಿವಾದಕ್ಕೆ ತೆರೆ ಎಳೆದಿದೆ. ಆದರೂ ಪೊಲೀಸರು ಮಾತ್ರ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಆಣತಿಯಂತೆ ಶರಣ್ ಪಂಪ್ ವೆಲ್ ಸೇರಿದಂತೆ ವಿ.ಹಿಂ.ಪ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇದು ಅಕ್ಷಮ್ಯ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ….

Read More

ಮಂಗಳೂರು: ರಸ್ತೆಯಲ್ಲಿ ಮತ್ತೆ ನಮಾಜ್ ನಡೆದಲ್ಲಿ ಧ್ವಜದ ಬದಲು ದಂಡ ಹಿಡಿಯುತ್ತೇವೆ – ಪುನೀತ್ ಅತ್ತಾವರ

ಮಂಗಳೂರು: ರಸ್ತೆಯಲ್ಲಿ ನಮಾಜ್ ನಡೆಸಿದವರ ಮೇಲೆ ಒಂದೇ ದಿನದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದಂತೆ ಸುಖಾಸುಮ್ಮನೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಹಾಕಿದ್ದಕ್ಕೂ ಬಿ ರಿಪೋರ್ಟ್ ನೀಡಿ ಎಂದು ಆಗ್ರಹಿಸಿ ವಿಎಚ್ ಪಿ ಕದ್ರಿ ಸರ್ಕಲ್ ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಬಜರಂಗದಳದ ಮುಖಂಡ ಪುನೀತ್ ಅತ್ತಾವರ ಮಾತನಾಡಿ, ಇನ್ನು ಮುಂದೆ ಯಾರಾದರೂ ರಸ್ತೆಯಲ್ಲಿ ನಮಾಜ್ ಮಾಡಿದರೆ ನಾವು ಮಸೀದಿಯ ಮುಂಭಾಗವೇ ಹನುಮಾನ್ ಚಾಲೀಸ ಪಠಣ ಮಾಡಿಯೇ ಮಾಡುತ್ತೇವೆ. ಅಲ್ಲದೆ ನಾವು ದಂಡದ ಬದಲು…

Read More

ದ.ಕ ಪ್ರವಾಸೋದ್ಯಮ: ಲೋಗೋ ವಿನ್ಯಾಸ ಮತ್ತು ಟ್ಯಾಗ್‌ಲೈನ್ ಸ್ಪರ್ಧೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಜಿಲ್ಲೆಗೊಂದು ಅತ್ಯಾಕರ್ಷಕವಾದ ಲೋಗೊ ವಿನ್ಯಾಸ ಮತ್ತು ಟ್ಯಾಗ್‌ಲೈನ್‌ ರೂಪಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಿದೆ. ತುಳುನಾಡಿನ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ಐತಿಹಾಸಿಕ ಹಿನ್ನಲೆ ಸೇರಿದಂತೆ ಈ ನೆಲದ ಸೊಗಡು ಬಿಂಬಿಸುವ ಅರ್ಥಪೂರ್ಣ ಥೀಮ್‌ ಆಧಾರಿತ ಲೋಗೊ ವಿನ್ಯಾಸ ಮತ್ತು ಟ್ಯಾಗ್‌ಲೈನ್‌ ನಿರೀಕ್ಷಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.ಆಯ್ಕೆಯಾಗುವ ಲೋಗೊಗೆ 15,000 ರೂ ಮತ್ತು ಟ್ಯಾಗ್‌ಲೈನ್‌ಗೆ 10,000 ರೂ. ಬಹುಮಾನ ನೀಡಲಾಗುತ್ತದೆ. ಆಸಕ್ತರು ಜೂ.2ರೊಳಗೆ ಕಳುಹಿಸಬೇಕು. ಭಾಗವಹಿಸುವವರು ಲೋಗೋ ಮತ್ತು ಅಡಿಬರಹವನ್ನು ರಚಿಸಬೇಕು…

Read More