ದ.ಕ.ಜಿಲ್ಲೆಯ ಮಳೆಹಾನಿಗೆ ರಾಜ್ಯ ಸರಕಾರ 300 ಕೋಟಿಗೂ ಅಧಿಕ ಪ್ಯಾಕೇಜ್ ಘೋಷಿಸಲಿ – ಶಾಸಕ ವೇದವ್ಯಾಸ ಕಾಮತ್
ಮಂಗಳೂರು : ಮಳೆಯಿಂದ ತೀವ್ರ ಹಾನಿಗೊಳಗಾದ ದ.ಕ.ಜಿಲ್ಲೆಗೆ ರಾಜ್ಯ ಸರಕಾರ 300ಕೋಟಿಗೂ ಅಧಿಕ ಪ್ಯಾಕೇಜ್ ಘೋಷಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು. ನಗರದ ಅಟಲ್ ಕೇಂದ್ರದಲ್ಲಿ ಮಾತನಾಡಿದ ಅವರು, ಮನೆ ಸಂಪೂರ್ಣ ಹಾನಿಯಾದಾಗ ಹಿಂದೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರಕಾರವು ಎನ್ಡಿಆರ್ಎಫ್ನ 1.20 ಲಕ್ಷ ಅನುದಾನಕ್ಕೆ 3.80ಲಕ್ಷ ಸೇರಿಸಿ 5ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಅದೇ ರೀತಿ ಭಾಗಶಃ ಹಾನಿಗೆ ಎನ್ಡಿಆರ್ಎಫ್ನ 50ಸಾವಿರ ಅನುದಾನಕ್ಕೆ ಸೇರಿಸಿ 2-3 ಲಕ್ಷ ಅನುದಾನ ನೀಡುತ್ತಿತ್ತು. ಇದೀಗ ಮಳೆ ಬಂದು…

