admin

ಬಜಪೆ ಪಟ್ಟಣ ಪಂಚಾಯತ್ ಚುನಾವಣೆ : ಬಿಜೆಪಿ ಜಯಭೇರಿ

ಮಂಗಳೂರು : ತಾಲೂಕಿನ ಬಜಪೆ ಪಟ್ಟಣ ಪಂಚಾಯತ್‌ಗೆ ಡಿ.21ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಲಭಿಸಿದೆ.ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡು ಬೀಗಿದೆ. ಕಾಂಗ್ರೆಸ್-4, ಎಸ್‌ಡಿಪಿಐ-3 ಮತ್ತು ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ.ಬುಧವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿ ಮಾತಗಳ ಎಣಿಕೆ ನಡಯಿತು. ಬಜಪೆಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. ವಿಜೇತರ ವಿವರ:ವಾರ್ಡ್ 1. ಯಶೋದ (ಬಿಜೆಪಿ)ವಾರ್ಡ್ 2. ಪದ್ಮನಾಭ ಪೂಜಾರಿ (ಬಿಜೆಪಿ)ವಾರ್ಡ್ 3. ಜಾಕೋಬ್…

Read More

ಕುಂಭ ಕಲಾವಳಿ ಕಾರ್ಯಕ್ರಮಕ್ಕೆ “ಉದ್ಯಮ ಸಿಂಧೂರ ಬಿರುದು” ಸನ್ಮಾನ ಸ್ವೀಕರಿಸಲಿರುವ “ವಿಠ್ಠಲ್ ಕುಲಾಲ್ “ರವರಿಗೆ ಆಹ್ವಾನ

ಮಂಗಳೂರು: ಉದ್ಯಮ ಸಿಂಧೂರ ಬಿರುದು ಸನ್ಮಾನ ಸ್ವೀಕರಿಸಲಿರುವ VK ಫರ್ನಿಚರ್ & ಎಲೆಕ್ಟ್ರಾನಿಕ್ಸ್ ಇದರ ಮಾಲೀಕರಾದ ಶ್ರೀ ವಿಠ್ಠಲ್ ಕುಲಾಲ್ ಇವರಿಗೆ ಕುಂಭ ಕಲಾವಳಿ ಕಾರ್ಯಕ್ರಮದ ಆಮಂತ್ರಣ ನೀಡಿ ಗೌರವ ಪೂರಕವಾಗಿ ಆಮಂತ್ರಿಸಲಾಯಿತು. ಈ ಸಮಯದಲ್ಲಿ ಜಿಲ್ಲಾ ಅಧ್ಯಕ್ಷರು ಲಯನ್ ಅನಿಲ್ ದಾಸ್, ವಿಭಾಗೀಯ ಅಧ್ಯಕ್ಷರು ಶ್ರೀ ಸುಕುಮಾರ್ ಬಂಟ್ವಾಳ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮಜಲ್ ಮತ್ತು ಕಿಶೋರ್ ಕುಮಾರ್ ಮಂಜೇಶ್ವರ, ಸುಕುಮಾರ್ ಬಂಟ್ವಾಳ, ಶ್ರೀನಿವಾಸ್ ಕಾವೂರ್ ಮುಂತಾದವರು ಉಪಸ್ಥಿತರಿದ್ದರು.

Read More

ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ ಸಾಧನೆಗೆ ನೆರವಾಗಿ- ಲಯನ್ ಅನಿಲ್ ದಾಸ್

ಉಳ್ಳಾಲ: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಹಳೇಕೋಟೆ ಇದರ ಆಶ್ರಯದಲ್ಲಿ ನಡೆಯುವ ಅನುದಾನಿತ ಶಾಲೆ ಸೈಯದ್ ಮದನಿ ಶಾಲೆ ಇದರ ಕ್ರೀಡೋತ್ಸವ ದ ಬಹುಮಾನ ವಿತರಣಾ ಸಮಾರಂಭವು ಡಿ.23ರಂದು ಹೊಸಕೋಟೆ ಉಳ್ಳಾಲದಲ್ಲಿ ನಡೆಯಿತು. ಸೈಯದ್ ಮದನಿ ದರ್ಗಾದ ಅಧ್ಯಕ್ಷರಾದ ಜನಾಬ್ ಹಾಜಿ ಬಿ.ಜಿ. ಹನೀಪ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅನಿಲ್ ದಾಸ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಯ್ಯದ್ ಮದನಿ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ…

Read More

ಜ. 04ರಂದು ಮಂಗಳೂರಿನ ಪುರಭವನದಲ್ಲಿ ಕುಂಭಕಲಾವಳಿ: ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಹಲವಾರು ಗಣ್ಯರಿಗೆ ಆಹ್ವಾನ

ಮಂಗಳೂರು: 2026ರ ಜ. 4ರಂದು ಮಂಗಳೂರಿನ ಪುರಭವನದಲ್ಲಿ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಸಹಯೋಗದಲ್ಲಿ ನಡೆಯಲಿರುವ ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮಕ್ಕೆ ಬಿಜೆಪಿ ಕಛೇರಿಗೆ ಭೇಟಿ ನೀಡಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಶಾಸಕ ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಮೇಯರ್…

Read More

ಮಂಗಳೂರು: ಟೋನಿ & ಗೈ ಐದನೇ ಮಳಿಗೆ ಉದ್ಘಾಟನೆ- ಲ.ಅನಿಲ್ ದಾಸ್ ಹಾಗೂ ಪದಾಧಿಕಾರಿಗಳು ಗಣ್ಯರಿಗೆ ಕುಂಭಕಲಾವಳಿಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

ಮಂಗಳೂರು: ಪ್ರಸಿದ್ಧ ಅಂತರರಾಷ್ಟ್ರೀಯ ಸಲೂನ್ ಬ್ರ್ಯಾಂಡ್ ಟೋನಿ & ಗೈ ಎಸೆನ್ಸುಯಲ್ಸ್, ಡಿಸೆಂಬರ್ 22 ರ ಭಾನುವಾರ ಸಂಜೆ ಕೆಎಫ್‌ಸಿ ಮತ್ತು ವೈನ್ ಗೇಟ್‌ನ ಮೇಲಿರುವ ಉರ್ವಾದ ಅಶೋಕ್ ನಗರದ ಬಿಂಬಿಸ್ ಕಟ್ಟಡದಲ್ಲಿ ತನ್ನ ಐದನೇ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿತು. ಹೊಸದಾಗಿ ತೆರೆಯಲಾದ ಟೋನಿ & ಗೈ ಎಸೆನ್ಸುಯಲ್ಸ್ ಉರ್ವಾ ಸ್ಟುಡಿಯೋವನ್ನು ರಿಬ್ಬನ್ ಕತ್ತರಿಸುವ ಸಮಾರಂಭದೊಂದಿಗೆ ಉದ್ಘಾಟಿಸಲಾಯಿತು, ನಂತರ ಗಣ್ಯ ಅತಿಥಿಗಳು ಸಾಂಪ್ರದಾಯಿಕ ದೀಪ ಬೆಳಗಿಸಿದರು. ಈ ವೇಳೆ ನೂತನ ಮಳಿಗೆಗೆ…

Read More

ಜ. 04ರಂದು ಮಂಗಳೂರಿನ ಪುರಭವನದಲ್ಲಿ ಕುಂಭಕಲಾವಳಿ: ಕಾರ್ಯಕ್ರಮಕ್ಕೆ ಸ್ಪೀಕರ್ ಯು.ಟಿ. ಖಾದರ್‌ ರವರನ್ನು ಬೇಟಿ ನೀಡಿ ಆಹ್ವಾನಿಸಿದ ಸಮಿತಿ ಪದಾಧಿಕಾರಿಗಳು

ಮಂಗಳೂರು: ಜ. 4, 2026ರಂದು ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ನಡೆಯಲಿರುವ ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಳ್ಳಾಲ ಜನಪ್ರಿಯ ಶಾಸಕರು, ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರನ್ನು ಸಮಿತಿ ಪದಾಧಿಕಾರಿಗಳು ಭೇಟಿಯಾಗಿ ಆಹ್ವಾನ ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್…

Read More

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ: ಸವಾರ ಗಂಭೀರ

ಬಂಟ್ವಾಳ: ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದು, ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾ.ಹೆ.ಯ ತುಂಬೆ ರಾಮಲ್ ಕಟ್ಟೆಯಲ್ಲಿ ಸೋಮವಾರ ಸಂಜೆ ನಡೆದಿದೆ. ರಾಮಲ್ ಕಟ್ಟೆ ನಿವಾಸಿ ಉಸ್ಮಾನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಉಸ್ಮಾನ್ ಅವರು ಅಂಗಡಿಯಿಂದ ಹಾಲು ಖರೀದಿಸಿ ಮನೆಗೆ ಹೋಗುವ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಬಳಿಕ ಅದರ ಚಾಲಕ ವಾಹನ ಸಮೇತವಾಗಿ ಪರಾರಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು,…

Read More

ಭಾರತೀಯ ರೈಲ್ವೆ ಇಲಾಖೆಯಲ್ಲಿ 22000 ಹುದ್ದೆಗಳ ನೇಮಕಾತಿ.!

ರೈಲ್ವೆ ನೇಮಕಾತಿ ಮಂಡಳಿ (RRB) ನಿರುದ್ಯೋಗಿ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿ ಪ್ರಕಟಿಸಿದೆ. ವಿವಿಧ ಇಲಾಖೆಗಳಲ್ಲಿನ ಉದ್ಯೋಗಗಳ ನೇಮಕಾತಿಗಾಗಿ 2026 ರ ಸಮಗ್ರ ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ರೈಲ್ವೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಉದ್ದೇಶದಿಂದ ಈ ಕ್ಯಾಲೆಂಡರ್ ಅನ್ನು ಮುಂಚಿತವಾಗಿ ಘೋಷಿಸಲಾಗಿದೆ. ವರ್ಷಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಯುವಕರಿಗೆ ಇದು ಉತ್ತಮ ಅವಕಾಶ ಎಂದು ಹೇಳಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು….

Read More

ಸುಳ್ಳು ಕೇಸ್ ದಾಖಲಿಸಿ ರಷ್ಯಾ ಸೈನ್ಯದ ಬಲೆಗೆ ಬಿದ್ದ ಭಾರತೀಯ ವಿದ್ಯಾರ್ಥಿ: ಉಕ್ರೇನ್ ಗಡಿಯಿಂದ ಜೀವ ಉಳಿಸುವಂತೆ SOS ವಿಡಿಯೋ ಸಂದೇಶ!

ಗುಜರಾತ್ ನ ಮೊರ್ಬಿ ಜಿಲ್ಲೆಯ 22 ವರ್ಷದ ವಿದ್ಯಾರ್ಥಿ ಉಕ್ರೇನ್ ನಿಂದ ಎಸ್ ಒಎಸ್ ಸಂದೇಶವನ್ನು ಕಳುಹಿಸಿದ್ದು, ಮಾದಕ ದ್ರವ್ಯ ಪ್ರಕರಣದಲ್ಲಿ ಸುಳ್ಳು ಸಿಲುಕಿರುವ ನಂತರ ರಷ್ಯಾದ ಸೇನೆಗೆ ಸೇರುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಉಕ್ರೇನ್ ಅಧಿಕಾರಿಗಳು ಬಿಡುಗಡೆ ಮಾಡಿದ ವೀಡಿಯೊ ಸಂದೇಶಗಳ ಮೂಲಕ ಸಾಹಿಲ್ ಮೊಹಮ್ಮದ್ ಹುಸೇನ್ ತಮ್ಮ ಅಗ್ನಿಪರೀಕ್ಷೆಯನ್ನು ಹಂಚಿಕೊಂಡಿದ್ದು, ಮಧ್ಯಪ್ರವೇಶಿಸಿ ಸುರಕ್ಷಿತವಾಗಿ ಮನೆಗೆ ಮರಳುವುದನ್ನು ಖಚಿತಪಡಿಸಿಕೊಳ್ಳುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಉನ್ನತ ಶಿಕ್ಷಣವನ್ನು ಪಡೆಯಲು 2024 ರಲ್ಲಿ ರಷ್ಯಾಕ್ಕೆ ಪ್ರಯಾಣಿಸಿದ್ದೇನೆ ಮತ್ತು…

Read More

ಸುಳ್ಯ: ನಿಂತಿದ್ದ ಓಮ್ನಿ ಕಾರಿಗೆ ಗುದ್ದಿ ಲಾರಿ ಪಲ್ಟಿ- ಚಾಲಕನಿಗೆ ಗಂಭೀರ ಗಾಯ

ಸುಳ್ಯ: ಗೂನಡ್ಕ ಬಳಿ ನಿಂತಿದ್ದ ಮಾರುತಿ ಓಮ್ನಿ ಕಾರಿಗೆ ಗುದ್ದಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪೈಪ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮಡಿಕೇರಿಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗೂನಡ್ಕ ಬಳಿ, ಸುಳ್ಯದಿಂದ ಕಲ್ಲಗುಂಡಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ನಂತರ ಲಾರಿ ಪಲ್ಟಿಯಾಗಿದೆ. ಓಮ್ನಿ ಕಾರು ಲಾರಿ ಅಡಿಯಲ್ಲಿ ಸಿಲುಕಿಕೊಂಡಿತ್ತು. ಆದರೆ, ಅಪಘಾತದ ಸಮಯದಲ್ಲಿ ಕಾರು ಚಾಲಕ ಹತ್ತಿರದ ಅಂಗಡಿಯಲ್ಲಿ ನಿಂತಿದ್ದರಿಂದ ಯಾವುದೇ ಪ್ರಾಣಾಪಾಯ ಆಗದೇ…

Read More