ಶಿರೂರು ಗುಡ್ಡ ಕುಸಿತ: ಈಶ್ವರ್​ ಮಲ್ಪೆಗೆ ನದಿಯಲ್ಲಿ ಪತ್ತೆಯಾದ ಸಾಮಾಗ್ರಿ ಅರ್ಜುನ್​ ಲಾರಿಯದ್ದಾ?

0 0
Read Time:1 Minute, 49 Second

ಶಿರೂರು: ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಡ್ರೈವರ್​ ಅರ್ಜುನ್ ನಾಪತ್ತೆಯಾಗಿದ್ದರು. ಅಂದು ಗಂಗಾವಳಿ ನೀರಿನ ರಭಸ ಜೋರಿದ್ದ ಕಾರಣ ಅರ್ಜುನ್​ ಮತ್ತು ಲಾರಿಯನ್ನು ಹುಡುಕಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಮುಳುಗು ತಜ್ಞ ಈಶ್ವರ್​ ಮಲ್ಪೆ ನೀರಿಗೆ ಇಳಿದು ಅರ್ಜುನ್​ಗಾಗಿ ಹುಡುಕಾಡಿದರು. ಕೊಟ್ಟ ಮಾತಿಗೆ ತಪ್ಪದ ಈಶ್ವರ್​ ಮಲ್ಪೆ ಮತ್ತೆ ಗಂಗಾವಳಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಲಾರಿ ಜಾಕ್ ಜೊತೆಗೆ ಲೋಹದ ಸಾಮಾಗ್ರಿ ಪತ್ತೆಯಾಗಿದೆ. ಆದರೀಗ ಪತ್ತೆಯಾದ ಸಾಮಾಗ್ರಿ​​ ಕುರಿತಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಶುಕ್ರವಾರದಂದು ಈಶ್ವರ್​ ಮಲ್ಪೆ ನದಿ ಆಳಕ್ಕೆ ಹೋಗಿ 15 ಕೆಜಿ ತೂಕದ ಸಾಮಾಗ್ರಿಯೊಂದನ್ನು ಪತ್ತೆಹಚ್ಚಿ ತೆಗೆದುಕೊಂಡು ದಡಕ್ಕೆ ಬಂದಿದ್ದರು. ಆದರೀಗ ಈ ಸಾಮಾಗ್ರಿ​ ಅರ್ಜುನ್​ ಲಾರಿಯದ್ದಲ್ಲ ಎಂಬ ಸತ್ಯ ಹೊರಬಿದ್ದಿದೆ. ಲಾರಿ ಮಾಲೀಕ ಇದು ತನ್ನ ಲಾರಿಯದ್ದಲ್ಲ ಎಂದು ಹೇಳಿದ್ದಾರೆ. ಲಾರಿ ಸಾಮಾಗ್ರಿ​ ಪತ್ತೆಯಾದಾಗಿನಿಂದ ಸ್ಥಳೀಯರಿಗೆ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ನೀರಿನಡಿಯಲ್ಲಿ ಮತ್ತೊಂದು ಲಾರಿ ಇದೆಯಾ ಎಂಬ ಪ್ರಶ್ನೆ ಕಾಡಿದೆ. ಇನ್ನು ಶಿರೂರು ಗುಡ್ಡ ಕುಸಿತದಲ್ಲಿ 3 ಗ್ಯಾಸ್​​ ಟ್ಯಾಂಕರ್​ ನದಿ ಪಾಲಾಗಿತ್ತು. ಆ ಮೂರರಲ್ಲಿ ಒಂದು ಲಾರಿಯ ಸಾಮಾಗ್ರಿ​ ಇದಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಈ ಸಾಮಾಗ್ರಿ​ ಹಲವು ಅನುಮಾನಗಳಿಗೆ ಕಾರಣವಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *