ಮಂಗಳೂರಿನಿಂದ ಬೆಂಗಳೂರಿಗೆ ಹೊಗುತ್ತಿದ್ದ ರೈಲಿನಲ್ಲಿ ಜನರಲ್ ಬೋಗಿಯಿಂದ ಬಿದ್ದ ಪ್ರಯಾಣಿಕ..!

0 0
Read Time:1 Minute, 19 Second

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಿಂದ  ಯುವಕನೋರ್ವ  ಬಿದ್ದು ಗಾಯಗೊಂಡು ನರಳುತ್ತಿದ್ದ ಪ್ರಯಾಣಿಕರೋರ್ವರನ್ನು ರೈಲ್ವೇ ಲೈನ್ ಬೀಟ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಸಕಲೇಶಪುರ ನಿವಾಸಿ ಉಮೇಶ್ ಎಂಬವರು ಗಾಯಗೊಂಡವರು. ಅವರು ಮಂಗಳೂರಿನಿಂದ ಬೆಂಗಳೂರಿಗೆ ಹೊಗುತ್ತಿದ್ದ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಸಕಲೇಶಪುರಕ್ಕೆ ಪ್ರಯಾಣಿಸುತ್ತಿದ್ದರು.

ದಾರಿ ಮಧ್ಯೆ ನರಿಮೊಗರು ಸಮೀಪ ಅವರು ರೈಲಿನಿಂದ ಆಯ ತಪ್ಪಿ ಬಿದಿದ್ದಾರೆ. ಆದರೆ ತೀವ್ರ ಗಾಯಗೊಂಡ ಅವರು ರೈಲ್ವೇ ಹಳಿಯ ಪಕ್ಕದಲ್ಲಿರುವ ಕಲ್ಲಿನ ಕಂಬದ ಪಕ್ಕ ನರಳಾಡುತ್ತಿದ್ದರು.

ಬೆಳಗ್ಗೆ ಕರ್ತವ್ಯ ನಿರತ ಕಬಕ ಪುತ್ತೂರು ರೈಲು ನಿಲ್ದಾಣದ ಬೀಟ್ ಸಿಬ್ಬಂದಿ ರಾಜೇಶ್ ಕೆದ್ಕಾರ್ ಅವರು ಹಳಿಯಲ್ಲಿ ತೆರಳುತ್ತಿದ್ದ ವೇಳೆ ಹಳಿಯ ಪಕ್ಕದಲ್ಲಿ ನರಳಾಡುತ್ತಿದ್ದ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ವಿಚಾರಿಸಿ ಬಳಿಕ ಸ್ಥಳೀಯರಿಬ್ಬರ ಸಹಾಯದೊಂದಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *