ಮೂಡುಬಿದಿರೆ: ಬಜರಂಗದಳ ಮಾಜಿ ಸಂಚಾಲಕನ ಹಟ್ಟಿಯಿಂದಲೇ ದನಗಳ ಕಳವು..! ಓರ್ವ ಅರೆಸ್ಟ್

0 0
Read Time:1 Minute, 36 Second

ಮೂಡುಬಿದಿರೆ: ಬಜರಂಗದಳದ ಮಾಜಿ ಸಂಚಾಲಕನ ಮನೆಯ ಹಟ್ಟಿಯಿಂದಲೇ ದನಗಳನ್ನು ಕದ್ದೊಯ್ದ ಓರ್ವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು. ಬಂಧಿಸಿದ್ದಾರೆ. ಪುತ್ತಿಗೆ ನಿವಾಸಿ ಮೊಹಮ್ಮದ್‌ ಆರೀಫ್‌ (25) ಬಂಧಿತ ಆರೋಪಿ.
10 ದಿನಗಳ ಹಿಂದೆ ಮೂಡುಬಿದಿರೆ ತಾಲೂಕಿನ ಬಜರಂಗದಳದ ಮಾಜಿ ಸಂಚಾಲಕ ಬೆಳುವಾಯಿ ಗ್ರಾಮದ ಖಂಡಿಗ ದರ್ಖಾಸು ನಿವಾಸಿ ಸೋಮನಾಥ ಕೋಟ್ಯಾನ್‌ರವರ ಮನೆಯ ಹಟ್ಚಿಗೇ ನುಗ್ಗಿ ದನಗಳನ್ನು ಕಳವುಗೈೆಯಲಾಗಿತ್ತು. ನಾಯಿ ಬೊಗಳಿದ ಶಬ್ದಕ್ಕೆ ಮನೆಯವರು ಹೊರಗೆ ಬಂದು ನೋಡಿದಾಗ ಸಿಲ್ವರ್‌ ಬಣ್ಣದ ಕಾರೊಂದು ಮನೆಯ ಹಿಂಭಾಗ ನಿಂತಿತ್ತು. ಡ್ರೈವರ್‌ ಸೀಟ್‌ ನಲ್ಲಿ ಓರ್ವ ಕುಳಿತಿದ್ದು ಕಾರು ಸ್ಮಾರ್ಟ್‌ನಲ್ಲಿಯೇ ಇರಿಸಲಾಗಿತ್ತು.

ಉಳಿದ ಇಬ್ಬರು ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನ ಮತ್ತು ಒಂದು ಕರುವನ್ನು ಕಾರಿಗೆ ತುಂಬಿಸಿಕೊಂಡು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಆವರ ಬೆನ್ನು ಬಿದ್ದಿದ್ದರು. ಇದೀಗ ಓರ್ವ ಆರೋಪಿ ಮೊಹಮ್ಮದ್‌ ಆಸಿಫ್‌ನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *