
Read Time:1 Minute, 8 Second
ಮಂಗಳೂರು: ನೀರು ಸರಬರಾಜು ಆಗುವ ಕೊಳವೆ ಮರುಜೋಡಣೆ ಮಾಡುವ ಹಿನ್ನಲೆಯಲ್ಲಿ ಮೇ 30ರ ಬೆಳಗ್ಗೆ 6ರಿಂದ ಮೇ 31ರ ಬೆಳಗ್ಗೆ 6ರವರೆಗೆ ಮಂಗಳೂರಿನ ಈ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಮಂಗಳೂರು ಮನಪಾ ನೀರು ಸರಬರಾಜು ವ್ಯವಸ್ಥೆಯ ತುಂಬೆ HLPS-1 18 MGD ರೇಚಕ ಸ್ಥಾವರದ ಪಂಪಿಂಗ್ ಮಾಡುವ ಕೊಟ್ಟಾರ ಚೌಕಿಯಿಂದ ಗೊಲ್ಡ್ ಪಿಂಚ್ ಗ್ರೌಂಡ್ವರೆಗೆ ಕೆಯುಐಡಿಎಫ್ಸಿ ವತಿಯಿಂದ 900 ಎಂ.ಎಂ ವ್ಯಾಸದ ಕೊಳವೆ ಮರುಜೋಡಣೆ ಕಾಮಗಾರಿ ಮಾಡುವ ಕಾಮಗಾರಿ ನಡೆಯಲಿದೆ. ಆದ್ದರಿಂದ ಮೇ 30 – 31ರವರೆಗೆ 24 ಗಂಟೆಗಳ ಕಾಲ ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್, ಭಾಗಶಃ ಕಾನ, ಬಾಳಾ, ಕುಳಾಯಿ, ಮೂಡಾ ಪಂಪ್ ಹೌಸ್, ಮುಕ್ಕ, ಪಣಂಬೂರು ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣ ನೀರು ಸರಬರಾಜು ನಿಲುಗಡೆಗೊಳಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಮನಪಾ ಮನವಿ ಮಾಡಿದೆ

