ಪೊಲೀಸ್ ವರಿಷ್ಟ ಅಧಿಕಾರಿ ವಿರುದ್ಧ ಹಿಂಜಾವೇ ಹೋರಾಟ..!

0 0
Read Time:2 Minute, 13 Second

ಹಿಂದೂ ವಿರೋಧಿ ಮನಃಸ್ಥಿತಿಯ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿರುದ್ಧ ಉಡುಪಿ ಜಿಲ್ಲಾ ಹಿಂಜಾವೇ ಹೋರಾಟಕ್ಕೆ ಕರೆ ನೀಡಿದೆ.

ಹಿಂದೂಗಳ ದೀಪೋತ್ಸವದ ವೇಳೆ ಹಿಂದೂ ದೇವಸ್ಥಾನಗಳ ಸುತ್ತ ಮುತ್ತ ಹಿಂದೂ ಬೀದಿ ವ್ಯಾಪಾರಿಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಅಂಗಡಿ ವ್ಯಾಪಾರಿಗಳಲ್ಲಿ ಮನವಿ ಸಲ್ಲಿಸಿದ ಹಿಂಜಾವೇ ಮುಖಂಡ ರಮೇಶ್ ತೆಳ್ಳಾರು ಇವರ ಮೇಲೆ ಜಾಮೀನು ರಹಿತ ಸುಮೋಟೊ ಕೇಸ್ ದಾಖಲು

ಈ ಒಂದು ಘೋರ ಅನ್ಯಾಯವನ್ನು ಪ್ರತಿಭಟಿಸಲು ಕರೆ ನೀಡಿದ ಕರಾವಳಿ ಹಿಂದೂಗಳ ಬಲಾಢ್ಯ ಶಕ್ತಿ, ಅಪ್ರತಿಮ ದೇಶಭಕ್ತ, ಪ್ರಖರ ರಾಷ್ಟ್ರೀಯವಾದಿ, ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಮೇಲೂ ಜಾಮೀನು ರಹಿತ ಸುಮೊಟೋ ಕೇಸ್ ದಾಖಲಿಸಲು ಆದೇಶಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ.

ಉಡುಪಿ ಜಿಲ್ಲೆಯಲ್ಲಿ ವಿನಾಕಾರಣ ಭಜರಂಗದಳ ವಿಶ್ವಹಿಂದೂ ಪರಿಷತ್, ಹಿಂದು ಜಾಗರಣ ವೇದಿಕೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳ 45ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಜಿಲ್ಲಾ ಪೋಲೀಸರು ದಾಖಲಿಸುತ್ತಾ ಬಂದಿದ್ದಾರೆ.

ಇಂತಹ ಸಾವಿರ ಕೇಸ್ ಹಾಕಿದರೂ ಹಿಂದುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ತಿಳಿಸಿದೆ.

ನಮ್ಮ ಹೋರಾಟ ಪೋಲೀಸ್ ಇಲಾಖೆ ವಿರುದ್ಧ ಅಲ್ಲವೇ ಅಲ್ಲ,
ನಮ್ಮ ಹೋರಾಟ ಹಿಂದೂ ವಿರೋಧಿ ಪೋಲೀಸ್ ವರಿಷ್ಠಾಧಿಕಾರಿ ವಿರುದ್ಧ ಎಂದು ಇನ್ನಷ್ಟು ಉಗ್ರ ಹೋರಾಟದ ಎಚ್ಚರಿಕೆಯನ್ನು ಸಂಘ ಪರಿವಾರದ ಮುಖಂಡರು ನೀಡಿದ್ದಾರೆ

ನಾಳೆ ಸೋಮವಾರ ದಿನಾಂಕ 25 ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಜಾಥಾದಲ್ಲಿ ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಿದ್ದಾರೆ..

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *