ಜೈಲಲ್ಲಿದ್ದರೂ, ಸರ್ಕಾರ ನಡೆಸಬಹುದು ಎಂದು ಸಿದ್ದರಾಮಯ್ಯಗೆ ಕೇಜ್ರಿವಾಲ್ ಫೋನ್ ಮಾಡಿ ಹೇಳಿರಬಹುದು :ಜಗ್ಗೇಶ್ ವ್ಯಂಗ್ಯ

0 0
Read Time:1 Minute, 31 Second

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿ ನಾಯಕರು ವಿಧಾನಸೌಧ ಒಳ ನುಗ್ಗಲು ಯತ್ನಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಟ, ರಾಜ್ಯಸಭಾ ಸಂಸದ ಜಗ್ಗೇಶ್‌ ಸಿದ್ದರಾಮಯ್ಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದ ರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಗೆ ಒಳಗಾಗ್ತಿದೆ. ಮೋದಿ ಹತ್ತು ವರ್ಷ ರಾಷ್ಟ್ರವನ್ನು ಸ್ವಚ್ಛಗೊಳಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಗೌರವ ಹೆಚ್ಚಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇರಲಿಲ್ಲ. ಬಹಳ ಕ್ಲೀನ್ ಹ್ಯಾಂಡ್ ಎಂದು ತಿಳಿದಿದ್ದೆ. ಆದರೆ, ಇವರು ಒಳಗೊಂದು ಹೊರಗೊಂದು ಎಂದು ಕಿಡಿ ಕಾರಿದರು.

ನ್ಯಾಯಾಲಯ ನೀವು ಮಾಡಿದ್ದು ತಪ್ಪು ಎಂದಾದರೂ ಹೋರಾಟ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಅನುಮಾನ ಹುಟ್ಟಿಸಿದೆ.ಇವರ ಸಂಗಡಿಗರು ಒಂದಲ್ಲಾ ಒಂದು ಕೇಸ್ ನಲ್ಲಿ ತನಿಖೆಗೆ ಒಳಗಾದವರು. ಅವರಿಂದ ಕೇಜ್ರಿವಾಲ್ ಸಿದ್ದರಾಮಯ್ಯಗೆ ಫೋನ್ ಮಾಡಿ ಹೇಳಿರಬಹುದು. ಜೈಲಿನಲ್ಲಿ ಇದ್ದರೂ ಸರ್ಕಾರ ನಡೆಸಬಹುದು ಎಂದು ಹೇಳಿರಬಹುದು ಎಂದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *