
Read Time:1 Minute, 16 Second
ವಿಟ್ಲ : ಕುಲಾಲ ಸಂಘ (ರಿ.) ವಿಟ್ಲ ಇದರ ಆಶ್ರಯದಲ್ಲಿ 27ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವವು ಸಂಘದ ಮಹಿಳಾ ಘಟಕದ ಸಹಭಾಗಿತ್ವದಲ್ಲಿ ದಿನಾಂಕ ಡಿ. 28 ರಂದು ಕುಲಾಲ ರಜತ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 11ಗಂಟೆಗೆ ಸಭಾ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಇವರ ಆರ್ಶಿವಾದೊಂದಿಗೆ ನಡೆಯಲಿದೆ.



ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ 7:30 ಕ್ಕೆ ಗಣಹೋಮ, 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 9:30 ಕ್ಕೆ ಭಜನೆ, 10:30 ಕ್ಕೆ ಮಹಾಪೂಜೆ ,ಪ್ರಸಾದ ವಿತರಣೆ, 11 ಗಂಟೆಗೆ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಇದರ ಅಧ್ಯಕ್ಷತೆಯನ್ನು ಬಿ.ಕೆ.ಬಾಬು ಇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರುಣಾಕರ ಬಿ, ಮಹೇಶ್ ಕೆ ಸವಣೂರು, ಶ್ರೀಮತಿ ಶಶಿಕಲಾ ಕೆ, ಶ್ರೀಮತಿ ರೋಹಿಣಿ ಬಿ, ಶ್ರೀಮತಿ ವಾರಿಜಾ ಬಾಬು ಮೂಲ್ಯ ಮಾರ್ನೆಮಿಗುಡ್ಡೆ ಭಾಗವಹಿಸಲಿದ್ದಾರೆ.



