ಸಿಎಂ, ಡಿಸಿಎಂ, ಸ್ಪೀಕರ್‌ ಯು.ಟಿ.ಖಾದರ್‌ ಹೆಸರಿನಲ್ಲಿ 30 ಕೋಟಿ ರೂ. ವಂಚನೆ: ಆರೋಪಿ ಮಹಿಳೆ ಬಂಧನ

0 0
Read Time:1 Minute, 54 Second

ಬೆಂಗಳೂರು: ಸಿಎಂ, ಡಿಸಿಎಂ, ಸ್ಪೀಕರ್‌ ಹೆಸರಿನಲ್ಲಿ ಶ್ರೀಮಂತ ಕುಟುಂಬದ 20 ಮಹಿಳೆಯರಿಗೆ 30 ಕೋಟಿ ವಂಚನೆ ಮಾಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹೆಚ್‌ವಿಕೆ ಗಾರ್ಡನ್‌ ನಿವಾಸಿ ಸವಿತಾ ಎಂಬಾಕೆ ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾದ ಶ್ರೀಮಂತ ಸ್ನೇಹಿತೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌, ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೆಸರು ಬಳಸಿಕೊಂಡು 30 ಕೋಟಿ ವಂಚಿಸಿದ್ದಾರೆ.

ಈ ಹಿನ್ನೆಲೆ ಆರೋಪಿ ಸವಿತಾ ಹಾಗೂ ಆಕೆಯ ಪರಿಚಯಸ್ಥ ಪುನೀತ್‌ ಎಂಬಾತನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.ಶ್ರೀಮಂತ ಮಹಿಳೆಯರಿಗೆ ವಿದೇಶದಿಂದ ಕಡಿಮೆ ಬೆಲೆಗೆ ಚಿನ್ನ ತರಿಸುವ ಆಮಿಷ, ರಿಯಲ್‌ ಎಸ್ಟೇಟ್‌ ನಲ್ಲಿ ಹೂಡಿಕೆ ಹೆಸರಿನಲ್ಲಿ ಶ್ರೀಮಂತ ಕುಟುಂಬದ ಮಹಿಳೆಯರ ಮನವೊಲಿಸಿ ವಂಚನೆ ಮಾಡಿರುವುದು ತಿಳಿದು ಬಂದಿದೆ.

ಈ ಹಿಂದೆ ಅನ್ನಪೂರ್ಣೇಶ್ವರಿ ನಗ ಪೊಲೀಸ್‌ ಠಾಣೆಯಲ್ಲಿ 85 ಲಕ್ಷ ರೂ ಹಾಗೂ ಗೋವಿಂದರಾಜ ನಗರ ಪೊಲೀಸ್‌ ಠಾಣೆಯಲ್ಲಿ2.50 ಕೋಟಿ ರೂ. ವಂಚನೆ ನಡೆಸಿದ್ದ ಆರೋಪದಡಿ ಸವಿತಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಹಿನ್ನೆಲೆ ಆಕೆಯನ್ನು ಬಂಧಿಸಲಾಗಿದ್ದು, ಸದ್ಯದ ತನಿಖೆಯಲ್ಲಿ ಅಂದಾಜು 30 ಕೋಟಿ ರೂ ವಂಚಿಸಿರುವುದು ಬೆಳಕಿಗೆ ಬಂದಿದೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ವಂಚನೆ ಮೊತ್ತ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *